ಚುಚ್ಚು ನುಡಿ …


ಚುಚ್ಚು ನುಡಿ ಯಾರಿಗಾದರೂ ಬೇಸರ ತರುತ್ತದೆ.
ಅದೂ ಅಲ್ಲದೆ ಮೇಲಿಂದ ಮೇಲೆ ಬಂದರೆ, ಆ ಸಂಬಂಧವೇ ಬೇಡ ಎಂದು ನಿರ್ಧರಿಸಿಬಿಡುತ್ತದೆ ಆ ಮನ.
ಅಂತಹ ಸ್ಥಿತಿಯನ್ನು ಅವಲೋಕಿಸಿ ಬರೆದ ಪ್ರಯೋಗವಿದು.
ನಿಮ್ಮ ಅನಿಸಿಕೆಗೆ ನಾನಂತೂ ಬೇಸರ ಪಡಲಾರೆ 🙂

 

Chucchi ommele sayisu

 

  1. ಬದರಿನಾಥ ಪಳವಳ್ಳಿಯ ಕವನಗಳು
    ಅಕ್ಟೋಬರ್ 24, 2013 ರಲ್ಲಿ 5:19 ಅಪರಾಹ್ನ

    ಉದ್ದೇಶ ಪೂರ್ವಕವಾಗಿ ನೋಯಿಸೋ ಮಾನವ ಮೃಗಗಳಿಗೆ ನಮ್ಮ ಮಾನಸಿಕ ವ್ಯಥೆ ಅರ್ಥವಾದೀತೆ? 😦

  2. Gayathri Deshkulkarni
    ಅಕ್ಟೋಬರ್ 24, 2013 ರಲ್ಲಿ 5:35 ಅಪರಾಹ್ನ

    Nindakarirabeku handigaLanthe – Purandar daasare heLibittiddare

    • ಅಕ್ಟೋಬರ್ 24, 2013 ರಲ್ಲಿ 5:44 ಅಪರಾಹ್ನ

      Gayatri, Puradaradasara maatu nija. Aadare adu illi prastuta alla allave? NindaNe kolakannu tegeyuttade. Aadare illi prastuta iruvudu vina kaarana tegaluvike. Nimma vichaaravinimayakke nanna hrudaya vandanegalu…

  3. ಅಕ್ಟೋಬರ್ 24, 2013 ರಲ್ಲಿ 5:59 ಅಪರಾಹ್ನ

    ಚಂದಿರನ ಮೇಲಿನ ಕಲೆ, ದೀಪದಲ್ಲಿರುವ ಸುಡುವ ಶಾಖ ಹೋಲಿಕೆ ಚೆನ್ನಾಗಿದೆ,ಇದು ಮನಸ್ಸಿಗೆ ಬಂದ ಮಾತುಗಳೋ ಮನದಾಳದ ನೋವೋ ತಿಳಿಯಲಿಲ್ಲ…

    • ಅಕ್ಟೋಬರ್ 25, 2013 ರಲ್ಲಿ 11:01 AM

      ಸರ್, ನಿಮ್ಮ ಅನಿಸಿಕೆಗೆ ನನ್ನ ಮನದಾಳದಿಂದ ಬರುತಿರುವ ಮಾತುಗಳು “ಧನ್ಯವಾದಗಳು”.
      ಮನದಾಳದ ಮಾತು ಮತ್ತು ನೋವು ಅನೇಕ ಸರ್ತಿ ಬೆಸೆದುಕೊಳ್ಳುತ್ತದೆ. ಹೀಗಾಗಿ ನನ್ನ ಮನದಲ್ಲಿ ನೋವೆ ಇಲ್ಲ ಎಂದು ಆತ್ಮವಂಚನೆ ಮಾಡಿಕೊಳ್ಳಲಾರೆ ಅಥವಾ ಇದು ಪೂರ ಕಾಲ್ಪನಿಕ ಎಂದೂ ಹೇಳಲಾರೆ. ಇದು “ನೋಡಿದ, ಕೇಳಿದ, ಅನುಭವಿಸಿದ, ಆಲೋಚಿಸಿದ, ಅವಲೋಕಿಸಿದ ವಿಷಯವನ್ನು ಕಾವ್ಯ ರೂಪಕ್ಕೆ ತರುವ ನನ್ನ ಪ್ರಯತ್ನ ” ಎಂದಷ್ಟೇ ಹೇಳಬಲ್ಲೆ …

  4. ಅನಾಮಿಕ
    ಅಕ್ಟೋಬರ್ 26, 2013 ರಲ್ಲಿ 9:15 ಅಪರಾಹ್ನ

    ಸಾಲು ಬಿಟ್ಟು ಸಾಲು ಪ್ರಾಸ
    ಸಾಲವೃಕ್ಷದಂತೆ ವಿಷಯ
    ಮೇಳಯಿಸಿರೆ ಕಾವ್ಯ ಸೊಗಸು
    ಭಲೆ ಬದರಿ ಸಾಧಿಸಿದಿರಿ

    ಬದುಕು ನೀರಿನಂತೆ ಕಾಣಿ
    ಬದುವಿನಲ್ಲೆ ಚೆಂದ ಮಾಣಿ
    ಹದವ ಮೀರೆ ನೀರು ನೆರೆಯು
    ಬದುಕಿನಲ್ಲು ಇದುವೆ ಸರಿಯು

    ಮುಂದುವರಿಯಲಿಂಥ ಪಥವು
    ಚಂದ ಪದಗಳಾಟ ದಿಟವು
    ಬೆಂದ ಮನಕು ಚಂದ ಮನಕು
    ಒಂದೆ ಪಥ್ಯ ಕಾವ್ಯ ದಿಟವು

    • ಅಕ್ಟೋಬರ್ 27, 2013 ರಲ್ಲಿ 6:24 ಅಪರಾಹ್ನ

      Anaku Ramanath Sir, ನಿಮ್ಮ ಪ್ರೋತ್ಸಾಹದ ಪದಲಾಲಿತ್ಯಕ್ಕೂ ಸಮವಲ್ಲದ ನನ್ನ ಸಾಲುಗಳನ್ನು ಮೆಚ್ಚಿ ಹರಸಿದ್ದೀರಿ. ಧನ್ಯೋಸ್ಮಿ. ನಿಮ್ಮ ಹಿತನುಡಿ, ದಾರಿ ತೋರುವ ಪಥದ ಮಾರ್ಗದರ್ಶಿಯಂತೆ ಸ್ವೀಕರಿಸುತ್ತೇನೆ … ಅನಂತಾನಂತ ಧನ್ಯವಾದಗಳು …

  1. No trackbacks yet.

Leave a reply to Badari Narayana ಪ್ರತ್ಯುತ್ತರವನ್ನು ರದ್ದುಮಾಡಿ